Anandabalaga 22nd Annual Day

Ananda Balaga Varshikotsava
Anandabalaga Varshikotsava

Anandabalaga Sports Day – 31/01/2010

Ananda Balaga Sports Day will be held on this Sunday 31 Jan 2010 from 9.00 AM onwards.

Date: Sunday 31 Jan 2010
Time: 9.00 AM to 5 PM
Place: National College ground, Jayanagara 7th block

Please attend and inform your friends also.

Ananda Balaga Sports Day

ಉಡುಪಿ ಶ್ರೀ ಕೃಷ್ಣನಿಗೆ ನವಕನಕ ರತ್ನ ರಥ

ಉಡುಪಿ ಶ್ರೀ ಕೃಷ್ಣನಿಗೆ  ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು  ‘ನವಕನಕ ರತ್ನ ರಥ’ವನ್ನು  ಸಮರ್ಪಿಸಿದರು.  ಆ ಸಂದರ್ಭದಲ್ಲಿ ಆನಂದ ಬಳಗದ ಕೆಲವು ಸಕ್ರಿಯ ಸದಸ್ಯರು ಉಪಸ್ಥಿತರಿದ್ದರು.

Navakanaka

ಅವನಿ ಕ್ಷೇತ್ರ ಪ್ರವಾಸ – ಒಂದು ಸುವರ್ಣ ಅನುಭವ

ಆನಂದ ಬಳಗ (ರಿ) ಸಾಂಸ್ಕೃತಿಕ ಸಮಿತಿ
ಸಂಚಾಲಕಿ: ಶ್ರೀಮತಿ ಕಸ್ತೂರಿ ಐತಾಳ್

Ananda balaga

ಹೆಸರಿಗೆ ಒಪ್ಪುವಂತೆ ತನ್ನ ಬಳಗವನ್ನು ಆನಂದಗೊಳಿಸಲು ಸಾಂಸ್ಕೃತಿಕ ಸಮಿತಿಯು ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮನೋಲ್ಲಾಸಕ್ಕಾಗಿ ವಾರ್ಷಿಕ ಪ್ರವಾಸವನ್ನು ಕೋಲಾರ ಜಿಲ್ಲೆಯ ಅವನಿ ಕ್ಷೇತ್ರಕ್ಕೆ ತಾ. ೨೫-೧೨-೨೦೦೯ ರಂದು ಆಯೋಜಿಸಿತ್ತು. ಬೆಳಗಿನ ಚುಮು ಚುಮು ಚಳಿ ಇದ್ದರೂ ತುಂಬು ಹರ್ಷದಿಂದ ಪ್ರವಾಸಿಗರು ೬ಗಂಟೆಗೆ ಶೇಷಾದ್ರಿಪುರಂನಲ್ಲಿ ಒಟ್ಟುಗೂಡಿದ್ದರು. ಶ್ರೀಮತಿ ಕಸ್ತೂರಿ ಐತಾಳ್ ಅವರ ನೇತ್ರತ್ವದಲ್ಲಿ ಪ್ರವಾಸಿ ಯುವ ದಂಪತಿಗಳಿಂದ ವಾಹನ ಪೂಜೆ ನಡೆದು ಎಲ್ಲರು ಬಸ್ಸನ್ನೇರಿ ಸೂಕ್ತವೆನಿಸಿದ ಕುರ್ಚಿಯಲ್ಲಿ ಆಸೀನರಾದರು. ಶ್ರೀಯುತ ವಿಶ್ಣುಮೂರ್ತಿ ಅವರು ಎಲ್ಲರನ್ನು ಉತ್ತೇಜಿಸುವ ಉತ್ಸಾಹದಲ್ಲಿದ್ದರು. ಶ್ರೀಮತಿ ಶ್ರೀಲಕ್ಶ್ಮಿ ದಾಸ್ ಅವರ ಪ್ರಾರ್ಥನೆಯೊಂದಿಗೆ ಶುರುವಾಗಿ ಎಲ್ಲ ಸದಸ್ಯರು ಒಬ್ಬೊಬ್ಬರಾಗಿ ತಮ್ಮ ಪರಿಚಯ-ಇರುವಿಕೆಯನ್ನು ಪ್ರಕಟಿಸಿದರು. ಮುಂದೆ ಬಸ್ಸು ಕೋಲಾರದತ್ತ ಮುಂದುವರಿದಂತೆಲ್ಲ ಕೆಲವರು ಅಂತಾಕ್ಶರಿಯಲ್ಲಿ ಮಗ್ನರಾಗಿದ್ದರೆ, ಇನ್ನು ಕೆಲವರು ಜೊಕುಗಳನ್ನು ಹೇಳುವುದರಲ್ಲಿ ತಲ್ಲೀನರಾಗಿದ್ದರು.

ಈ ಸಮಯಕ್ಕೆ ಬಿಸಿ ಬಿಸಿ ಇಡ್ಲಿ ಸಾಂಬಾರ್, ಕ್ಯರೇಟ್ ಹಲ್ವ, ಉಪ್ಪಿಟ್ಟು , ಕಾಫಿ ಎಲ್ಲರನ್ನು ಚುರುಕುಗೊಳಿಸಿತು. ಈ ಎಲ್ಲವನ್ನು ಮುಗಿಸಿ, ಪ್ರಯಾಣ ಮುಂದುವರಿಸಿ ಮೊದಲ ದರ್ಶನ ತಾಣ ಬೆಟ್ಟದ ಬುಡದಲ್ಲಿ ಶ್ರೀ ಶಾರದಾಂಬ ದೇವಸ್ಥಾನ ಹಾಗು ಅವನಿ ಶಂಕರಮಠ ತಲುಪುವಾಗ ಸಮಯ ೧೧ಗಂಟೆ. ಬೆಟ್ಟದ ನೆತ್ತಿಯಲ್ಲಿ ಸೀತಾ ಮಾತೆಯ ಮಂದಿರವಿದೆ. ಇವೆರಡನ್ನು ಜೋಡಿಸಲು ಸುಮಾರು ೨೮೦೦ರಷ್ಟು ಮೆಟ್ಟಲುಗಳಿವೆ. ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಸಮೂಹಿಕ ಪೂಜೆ ಸಲ್ಲಿಸಿ ಕ್ಷೇತ್ರದ ಪೂಜಾರಿಗಳಿಂದ ಸ್ಥಳಪುರಾಣದ ಪ್ರವಚನವನು ಕೇಳಿ ಅವನಿ ಕ್ಷೇತ್ರ ಮೂಲತಹ ’ಅವಂತಿ ಕ್ಷೇತ್ರ’ ಎಂದಾಗಿದ್ದು ೧೦ನೇಯ ಶತಮಾನದಲ್ಲಿ ರುದ್ರ ಭಟ್ಟಾರಕರೆಂಬ ತಪೋಧನರು ನಡೆಸಿದ ಯಾಗದ ಕಾರಣ ಹಾಗೆ ಕರೆಯಲ್ಪಟ್ಟಿತೆಂದು ತಿಳಿದುಬಂತು. ಇಲ್ಲಿ ಸೀತಾ ದೇವಿಯು ಕುಳಿತುಕೊಳ್ಳುತಿದ್ದ ’ತೊಟ್ಟಿಲ ಗುಂಡು’, ಶ್ರೀ ವಾಲ್ಮೀಕಿ ಮಹರ್ಶಿಗಳ ಆಶ್ರಮ, ಲವ-ಕುಶರ ಗುಡಿಯೂ ಇದೆ. ಇಲ್ಲಿಯೇ ಲವ-ಕುಶರು ಜನ್ಮತಾಳಿ ಬಾಲ್ಯ ಕಳೆದರೆಂದು ಪ್ರರೇತಿ. ಸೀತಾ ಮಾತೆ ಹಾಗು ಶ್ರೀ ರಾಮರು ಏಕಾಂತದಲ್ಲಿ ಇರುತ್ತಿದ್ದರೆನ್ನಲಾದ ಸ್ಥಳವು ಇಲ್ಲಿಯೇ ಬೆಟ್ಟದ ಮಾರ್ಗದಲ್ಲಿದೆ. ಇಲ್ಲಿರುವ ಗುಹೆಯೊಂದರಲ್ಲಿ ಕಾಣಬಲ್ಲ ಪಂಚಲಿಂಗಗಳನ್ನು ಪಂಚಪಾಂಡವರರೆ ಪ್ರತಿಷ್ಟಾಪಿಸಿದರೆನ್ನುವ ನಂಬಿಕೆ. ಇವುಗಳಲ್ಲದೆ ಹೊರಳುಗುಂಡು, ಕುದುರೆಗುಂಡು, ಅಗ್ನಿತೀರ್ಥ, ಅಂತರ್ಗಂಗೆ ನೋಡಲಿರುವ ಸ್ಥಳಗಳು. ಹೊರ‍ಳುಗುಂಡುವಿನ ಬುಡದಲ್ಲಿ ಒಬ್ಬ ಮನುಶ್ಯ ಹೊಗಬಹುದಾದಶ್ಟು  ಸ್ಥಳವಿದ್ದು ಕೆಲವು ಸದಸ್ಯರು ಹೊರಳು ಸೇವೆ ನಡೆಸಿದರು.

ನಾವು ಬೆಟ್ಟ ಇಳಿದು ಶಂಕರಮಠ ತಲುಪಿದಾಗ ಸಮಯ ೧ಗಂಠೆ. ಹಸಿವಿಗೆ ತಕ್ಕಂತೆ ಹೋಳಿಗೆ, ಬಿಸಿಬೇಳೇಬಾತು, ಡ್ರೈ ಫ಼್ರೂಟ್ ಲಾಡು, ಸಾರನ್ನ ಮೊಸರನ್ನದ ಸುಗ್ರಾಸ ಭೋಜನ. ಸಂಪ್ರದಾಯದಂತೆ ಹರಗೋವಿಂದಾ ಹೇಳಿದ್ದು ಮತ್ತು ಚೂರ್ಣಿಕ ಹಾಡಿದ್ದು  ನಮ್ಮ ಮೂಲ ಬೇರನ್ನು ನೆನಪಿಸಿದವು. ಅವನಿಯಿಂದ ಸೀದ ಬಂಗಾರ ತಿರುಪತಿಗೆ ಬಂದು ಅಲ್ಲಿ ವೈಕುಂಟ ಏಕಾದಶಿಯ ಸಲುವಾಗಿ  ಸಲ್ಲಿದ ಶ್ರೀ ವೆಂಕಟೇಶ್ವರ-ಪದ್ಮಾವತಿ ಅಮ್ಮನವರ ದರ್ಶನ ಎಲ್ಲರಿಗೂ ಸಂತೊಷ ತಂದಿತು. ವಾಪಸ್ ಬರುತ್ತ  ಶ್ರೀ ರಾಮ ಲಿಂಗೇಶ್ವರ, ಲಕ್ಷ್ಮಣ ಲಿಂಗೇಶ್ವರ, ಭರಥೇಶ್ವರ, ಶತ್ರುಗ್ನೇಶ್ವರ ದೇವಾಲಯಗಳನ್ನು ಸಂದರ್ಶಿಸಿದೆವು. ಈ ದೇವಾಲಯಗಳಲ್ಲಿ ಕೆಲವು ಭೀಮ ಗಾತ್ರದ ಅಂಗಗಳು ಪ್ರತಿಶ್ಟಾಪಿಸಲ್ಪಟ್ಟಿದ್ದು  ಶ್ರೀ ಬೃಹದೀಶ್ವರನನ್ನು ನೆನಪಿಗೆ ತಂದವು. ಪ್ರಮುಖ ಮಾಧ್ವಕ್ಷೇಂದ್ರಗಳಲ್ಲೋಂದಾದ ಮುಳುಬಾಗಿಲಿನಲ್ಲಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಪರಿಸರದಲ್ಲಿರುವ ಕಂಚಿನ ಹಲ್ಲಿಯನ್ನು ಸ್ಪರ್ಷಿಸಿ ತತ್ಸಂಬಂಧ ದೋಶಗಳು ನಿವಾರಣೆ ಆಯ್ತ್ಂದುಕೊಂದರು. ಮುಂದೆ ಬರುತ್ತ ಮಾರ್ಗದಲ್ಲಿ ಇಳಿದು ಟೀಕಾಣಿ ಹಾಕಿ ಸಯಂಕಾಲದ ಉಪಾಹಾರವನ್ನು ಮುಗಿಸಿದೆವು. ಈ ಸಂಧರ್ಬದಲ್ಲಿ ಶ್ರೀ ಕೆ. ಎನ್. ಅಡಿಗರು ಬಳಗದ ಪ್ರವಾಸ ಕಾರ್ಯಕ್ರಮಗಳು ಆನಂದ ಬಳಗದ ಧ್ಯೇಯಕ್ಕೆ ಪೂರಕವಾಗಿದೆ ಎಂಬುದನ್ನು ವಿಶೇಷತೆಯಿಂದ ವ್ಯಕ್ತಪಡಿಸಿದರು. ಬೆಳದಿಂಗಳು ಅಣಿಯಾದಂತೆ ಶಾವಿಗೆಬಾತ್ ಹಾಗು ಚಹ ಸೇವನೆ ಮುಗಿಸಿ ಪುನಃ ಬಸ್ಸನ್ನೇರಿ ಮರು ಪ್ರಯಾಣ. ಸಾಲದ್ದಕ್ಕೆ ೮ಗಂಟೆಗೆ ಮೂರ್ತಿಯವರು ಊರಿನ ಬನ್ಸ್, ಅವರೆಕಾಳು ಪೊಟ್ಟಣವನ್ನು ಎಲ್ಲರಿಗು ಹಂಚಿದರು. ಪ್ರವಾಸಕ್ಕೆ ಬೇಕಾದ ಉಪಹಾರ ಮತ್ತು ಊಟದ ಕೀರ್ತಿ ಶ್ರೀ ವೆಂಕಟ್ ರಾಜ್ ಅವರಿಗೆ ಸಲ್ಲುತ್ತದೆ. ಸುಖಪ್ರಯಾಣ ಮುಗಿಸಿ ನಾವು ಮೂಲ ಸ್ಥಾನ ಶೇಷಾದ್ರಿಪುರಂಗೆ ಬಂದಾಗ ರಾತ್ರಿ ೧೦ಗಂಟೆ. ಸಾಂಸ್ಕೃತಿಕ ಸಮಿತಿಯ ಆಯೊಜಕರ ಶ್ರಮ ಸಾರ್ಥಕವೆನಿಸಿತು. ಎಲ್ಲರ ಮುಖದಲ್ಲಿಯೂ ನಲಿವಿತ್ತು. ನೆನಪಿಸಿಕೊಳಲ್ಲು ಬಹಳಷ್ಟಿತ್ತು.

- ಸಾಂಸ್ಕೃತಿಕ ಸಮಿತಿಯ ಪರವಾಗಿ ವಾಕ್ವಾಡಿ ನರಸಿಂಹ ಹೊಳ್ಳ.

ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರಿಗೆ ಪೂರ್ಣ ಪ್ರಜ್ಞ ವಿದ್ಯಪೀಠದಲ್ಲಿ ಪೌರ ಸನ್ಮಾನ ಕಾರ್ಯಕ್ರಮ

ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು

ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು

|| ಕೃಷ್ಣಂ ವಂದೇ ಜಗದ್ಗುರುಂ ||

ಜಗತ್ಪ್ರಸಿದ್ಧ ಉಡುಪಿ ಶ್ರೀ ಕೃಷ್ಣಪೂಜಾ ದೀಕ್ಷೆಯ ಶಿರೂರು ಮಠದ ಪರ್ಯಾಯೋತ್ಸವವು ೨೦೧೦ರ ಜನವರಿಯಲ್ಲಿ ನಡೆಯಲಿದೆ.

ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿಯ ಅನ್ನಬ್ರಹ್ಮ ಶ್ರೀಕೃಷ್ಣನ ಪೂಜಾ ಕೈಂಕರ್ಯದಲ್ಲಿ ನಿರತರಾಗಿರುವ ಅಷ್ಠಮಠಗಳಲ್ಲೊಂದಾದ ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದಂಗಳವರು ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ಪೂಜಾದೀಕ್ಷೆ ಕೈಗೊಂಡು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ತಮ್ಮ ತೃತೀಯ ಪರ್ಯಾಯ ಪೂಜಾ ದೀಕ್ಷೆಯ ಪೀಠವೇರುವುದಕ್ಕೆ ಪೂರ್ವಭಾವಿಯಾಗಿ ದೇಶಪರ್ಯಟನೆಗಾಗಿ ಸಂಚಾರದಲ್ಲಿರುವ ಶ್ರೀಪಾದರು ವಿವಿಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಇದೇ ೧೮-೧೨-೨೦೦೯ ಶುಕ್ರವಾರದಂದು ಬೆಂಗಳೂರು ಮಹಾನಗರದ ಪುರಪ್ರವೇಶ ಮಾಡಲಿದ್ದಾರೆ.

ಅಂದು ಸಂಜೆ ೪-೩೦ ಗಂಟೆಗೆ ಎನ್. ಆರ್. ಕಾಲೋನಿ, ಶ್ರೀ ರಾಮಮಂದಿರದ ಬಳಿ ಇರುವ ಶ್ರೀ ಗುರು ರಾಘವೇಂದ್ರ ಸನ್ನಿಧಾನ (ರಾಯರ ಮಠ)ದಿಂದ ಶ್ರೀಗಳನ್ನು ಸ್ವಾಗತಿಸಲು ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿದ್ದು ಆ ಬಳಿಕ ೬-೦೦ ಗಂಟೆಗೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳಿಗೆ ಪೌರಸನ್ಮಾನ ಹಮ್ಮಿಕೊಳ್ಳಲಾಗಿದೆ.

ಸನ್ಮಾನ ಕಾರ್ಯಕ್ರಮದ ನಂತರ ಶ್ರೀಗಳಿಗೆ ತುಲಾಭಾರ ಸೇವೆಯನ್ನು ಮತ್ತು ಪಾದಪೂಜೆಯನ್ನು ಏರ್ಪಡಿಸಲಾಗಿದೆ.

ಸ್ವಾಗತ ಕಾರ್ಯಕ್ರಮದಲ್ಲಿ, ಮೆರವಣಿಗೆಯಲ್ಲಿ ಮತ್ತು ಸನ್ಮಾನ ಸಭೆಯಲ್ಲಿ ಹಾಗೂ ತುಲಾಭಾರ, ಪಾದಸೇವೆ ಕಾರ್ಯಕ್ರಮಗಳಲ್ಲಿ ಸದ್ಭಕ್ತ ಬಾಂಧವರಾದ ತಾವೆಲ್ಲರೂ ಭಾಗವಹಿಸಿ ಶ್ರೀಗಳ ಅನುಗ್ರಹ ಪೂರ್ವಕ ಫಲಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಕೋರುತ್ತೇವೆ.

- ಪೌರ ಸನ್ಮಾನ ಸಮಿತಿ

Samskrutika Sanje – 2009

ಆನಂದ ಬಳಗ (ರಿ)
ಸಾಂಸ್ಕೃತಿಕ ಸಂಜೆಯ ಪ್ರತಿಭಾ ಪರಿಷೆ

ಆನಂದ ಬಳಗದ ಸಾಂಸ್ಕೃತಿಕ ವಿಭಾಗವು ನಗರದ ಪುರಭವನದಲ್ಲಿ ದಿನಾಂಕ ೬-೧೨-೨೦೦೯ ರಂದು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವು ಶ್ರೀಮತಿ ಕಸ್ತೂರಿ ಐತಾಳ್ ಆವರ ದಕ್ಷ ಸಂಯೋಜನೆಯಲ್ಲಿ ಬಹಳ ಅದ್ದೂರಿಯಾಗಿ ನೆರೆವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಕಲಾ ರಸಿಕರು ಹಾಗು ಪುರಭವನದ ಸಭಿಕರ ಮೊಗದಲ್ಲಿದ್ದ ಹರ್ಷೋಲ್ಲಾಸ ಸಾಂಸ್ಕೃತಿಕ ಸಂಜೆಯ ವೈಭವವನ್ನು ಪ್ರತಿಬಿಂಬಿಸುತಿತ್ತು.

ಆನಂದ ಬಳಗದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಹಾಗು ಶ್ರೀ ಗುರುರಾಜ ಕಲ್ಯಾಣ ಮಂಟಪದ ಮಾಲೀಕರಾದ ಶ್ರೀ ವಾದಿರಾಜ್ ರಾವ್ ಅವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಳಗದ ಮಾಜಿ ಅಧ್ಯಕ್ಷರುಗಳಾದ ಶ್ರೀ ಸದಾನಂದ ಮಡಿ ಹಾಗು ಶ್ರೀ ಎಸ್. ಟಿ. ಆರ್. ಮಡಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಭಟ್ ಹಾಗು ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಶ್ರೀಮತಿ ಕಸ್ತೂರಿ ಐತಾಳ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆದಿತ್ಯ ಕಾವೂರ್ ಹಾಗು ಸಹನ ಭಟ್ ಅರಂಭದಿಂದ ಕೊನೆಯ ಶಾಂತಿ ಮಂತ್ರದವರೆಗೆ ಕಾರ್ಯಕ್ರಮದ ನಿರೂಪಣೆಯಲ್ಲಿ ಮಿಂಚಿದರು. ಶ್ರೀಮತಿ ಮಂಜುಳ ಗುರುರಾಜ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಎನ್. ವಿ. ಜಿ. ಕೆ. ಭಟ್ ನೆರೆದ ಅತಿಥಿಗಳು ಹಾಗು ಸಭಿಕರೆಲ್ಲರಿಗೂ ಸ್ವಾಗತ ಕೋರಿದರು. ಶ್ರೀ ಶರತ್ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶ್ರೀ ಎಸ್. ಟಿ. ಆರ್. ಮಡಿಯವರು ಮುಖ್ಯ ಅತಿಥಿಗಳಿಗೆ ಮಾಲಾರ್ಪಣೆ ಮಾಡಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

ನಮ್ಮ ಬಳಗದ ಎಲ್ಲಾ ಸದಸ್ಯರ ಪ್ರತಿಭೆಯನ್ನು ಹೊರತರುವ ಯುವ ಪ್ರತಿಭಾ ಸ್ಪರ್ಧೆ ದಿನಾಂಕ ೮-೧೧-೨೦೦೯ ರಂದು ಕೆಂಪೇಗೌಡ ರಸ್ತೆಯಲ್ಲಿರುವ ಹರೇ ರಾಮ್ ಹೊಟೆಲ್ ನ ವೈಷ್ಣವಿ ಹಾಲ್ ನಲ್ಲಿ ನಡೆಯಿತು. ಏಕಪಾತ್ರಭಿನಯ, ಆಶುಭಾಷಣ, ದೇವರನಾಮ, ಭಾವಗೀತೆ, ದಂಪತಿಗಳಿಗೆ ರಸಪ್ರಷ್ನೆ ಇಂತಹ ಸ್ಪರ್ಧೆಗಳು ತೀವ್ರ ಪೈಪೋಟಿಯಿಂದ ಸ್ಪರ್ಧಿಸಲಾಯಿತು. ಅದರಲ್ಲಿ ವಿಜೇತರಾದವರ ಹೆಸರನ್ನು ಶ್ರೀಮತಿ ಶೋಭಾ ರಾಧಾಕೃಷ್ಣ ಅವರು ಓದುತ್ತಿದ್ದಂತೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿ ಅಭಿನಂದಿಸಿದರು. ನಂತರ ಮಾತನಾಡಿದ ಮುಖ್ಯ ಅತಿಥಿಗಳು ಆನಂದ ಬಳಗವು ಇನ್ನೂ ಹಲವಾರು ವಿಭಾಗಳನ್ನು ಸ್ಥಾಪಿಸಿ ಅವುಗಳ ಮೂಲಕ ಮತ್ತಷ್ಟು ಸದಸ್ಯರಿಗೆ ಬಳಗದ ಸೇವೆ ತಲುಪುವಂತೆ ಆಗಲೆಂದು ಅಭಿಪ್ರಾಯ ಪಟ್ಟರು. ಬಳಗದ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಟಿ. ಆರ್. ಮಡಿಯವರು ಮಾತನಾಡಿ ಬಳಗದ ಪ್ರಗತಿಪರ ಸಾಧನೆಗಳನ್ನು ಸಭಾಸದರ ಮುಂದಿಟ್ಟರು. ಆನಂದ ಬಳಗದ ಹಾಗು ಆನಂದ ಸದನದ ಏಳಿಗೆಗಾಗಿ ತನು-ಮನ-ಧನದ ರೀತಿಯಲ್ಲಿ ಸಹಾಯ ಮಾಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತಾ ಸಾಂಸ್ಕೃತಿಕ ಸಂಜೆಯ ಯಶಸ್ಸಿಗೆ ಶ್ರಮ ವಹಿಸಿದವರಿಗೆ ಸ್ಪೂರ್ಥಿಯ ಮಾತುಗಳನ್ನಾಡುವುದರ ಜೊತೆಗೆ ಪ್ರಾಯೊಜಕರಿಗೆ ಪುಷ್ಪ ಗುಚ್ಚಗಳನ್ನು ನೀಡಿ ಗೌರವಿಸಿದರು. ಕೊನೆಯಲ್ಲಿ ಶ್ರೀ ಕಿರಣ್ ಕೆ. ಎಸ್. ಅವರ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡಿತು.

ಗಣ್ಯರು ವೇದಿಕೆಯನ್ನು ತೆರವುಗೋಳಿಸುತ್ತಿದ್ದಂತೆ ಸಭಿಕರರು ಕಾತುರರಾಗಿ ಕಾಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವು, ಸಹೋದರ-ಸಹೋದರಿ ಜೋಡಿ ಶ್ರೀ ಟಿ. ಎನ್. ಉದಯಕೃಷ್ಣ ಉಪಾಧ್ಯಾಯ ಹಾಗೂ ಶ್ರೀಮತಿ ದೀಪಾ ಸುಧೀಂದ್ರಕುಮಾರ್ ಅವರ ಗಣೇಶ ವಂದನೆ ನೃತ್ಯದೊಂದಿಗೆ ಆರಂಭವಾಯಿತು. ಪ್ರತಿಭಾ ಮೇಳದ ವಿಜೇತರಾದ ಶ್ರೀಮತಿ ಶ್ರೀಲಕ್ಷ್ಮಿ ದಾಸ್ ಅವರ ದೇವರನಾಮ, ಶ್ರೀಮತಿ ವಿದ್ಯಾ ಕಾವೂರ್ ಅವರ ಏಕಪಾತ್ರಾಭಿನಯ ಹಾಗು ಕುಮಾರಿ ವೈಷ್ಣವಿ ಆಚರ್ ಅವರ ಭಾವಗೀತೆ ಜನರ ಪ್ರಶಂಸೆಗೆ ಒಳಗಾದವು.

ಒಂದೇ ನೃತ್ಯದಲ್ಲಿ ಶ್ರೀ ಕೃಷ್ಣನನ್ನು ಸ್ಮರಿಸಿ ಸೊಗಸಾದ ಅಭಿನಯದೊಂದಿಗೆ ತಾವೇ ನೃತ್ಯ ನಿರ್ದೇಶನ ಮಾಡಿ ನರ್ತಿಸಿದರು ಶ್ರೀಮತಿ ಸಂಗೀತ ಶ್ರೀಪತಿ ಹಾಗು ಕುಮಾರಿ ವರ್ಣಾ ಕೆ. ಆರ್. ನೃತ್ಯ ಗಾಯನಗಳ ನಡುವೆ ಇಡೀ ಪುರಭವನದಲ್ಲಿ ನಗೆಯ ಅಲೆಯನು ಹರಿಸಿದರು ದೇವರಾಜ್ ಕರಬ, ರಮೇಶ್ ಭಟ್, ಜನಾರ್ಧನ್ ಆಚಾರ್ಯ, ಕೃಷ್ಣ ಆಚಾರ್ಯ ಹಾಗು ಶ್ರೀಮತಿ ಗೀತಾ ಆಚಾರ್ಯ. ನಮ್ಮ ಕಾರ್ಯಕ್ರಮಗಳಲ್ಲಿ ಅನೇಕ ವರ್ಷಗಳಿಂದ ವಿಶೇಷತೆ ಇರುವ ನೃತ್ಯಗಳನ್ನು ಮಾಡಿಸಿಕೊಂಡು ಬರುತ್ತಿರುವ ಶ್ರೀ ಗೋವಿಂದ್ ರಾಜ್ ಅವರ ನೃತ್ಯ ನಿರ್ದೇಶನದಲ್ಲಿ ಜನಪ್ರಿಯ ಜಾನಪದ ನೃತ್ಯ ಕೋಲಾಟವನ್ನು ಮಾಡಿ ತೋರಿಸಿದವರು ಶ್ರೀಮತಿಯರಾದ ಮೀನಾಕ್ಷಿ ಉಡುಪ, ವಿಜಯಾ ಭಟ್, ಪ್ರತಿಮಾ ಗಣೆಶ್, ಶ್ರೀಕಲಾ, ರೇಣುಕಾ ಕಿರಣ್, ಕೀರ್ತನಾ ಶರತ್, ಶ್ರೀಲಕ್ಷ್ಮಿ ದಾಸ್, ವಿದ್ಯಾ ರಾವ್, ಮೇಧಿನಿ ಕಲ್ಮಾಡಿ ಹಾಗು ಅರ್ಚನ ರಾವ್. ಶ್ರೀಮತಿ ಸಂಗೀತ ಶ್ರೀಪತಿಯವರ ನೃತ್ಯ ನಿರ್ದೇಶನದಲ್ಲಿ ಮತ್ತೆರಡು ನೃತ್ಯಗಳು ’ರಂಗಿನ ಹೂಗಳ ಬಣ್ಣದ ಲೋಕ’ ವನ್ನು ಕುಮಾರಿಯರಾದ ನಮ್ರತಾ ರಾವ್, ಸುಮಾ ಆರ್, ಪೂಜಾ ಆಚರ್ಯಾ, ಚೈತ್ರಾ ರಾವ್, ಶ್ರೀರಂಜಿನಿ, ಅಪೂರ್ವ, ಸುಶ್ಮಿತಾ ಹಾಗು ಶ್ರೀಮತಿ ಪ್ರಿಯಾ ದರ್ಶನ್ ಸೊಗಸಾಗಿ ತೆರೆದಿಟ್ಟರೆ, ’ಪ್ರೇಮದ ಹಕ್ಕಿಗಳು’ ಎಂಬ ನೃತ್ಯವನ್ನು ಶ್ರೀಮತಿ ಸಂಗೀತ ಶ್ರೀಪತಿ ಹಾಗು ಸುಮಾ ಆರ್. ಪ್ರಸ್ತುತ ಪಡಿಸಿದರು. ಇನ್ನು ವಾಯ್ಸ್ ಆಫ಼್ ಇಂಡಿಯಾ ಖ್ಯಾತೆಯ ರಿತಿಶಾ ಪದ್ಮನಾಭ್ ಅವರ ಗಾಯನ ಇಡೀ ಪುರಭವನದ ಸಭಿಕರನ್ನು ರೋಮಾಂಚನಗೊಳಿಸಿತು.

ಬಳಗದ ತರುಣ-ತರುಣೆಯರು ಹಲವಾರು ಪ್ರಾಕಾರದ ನೃತ್ಯಗಳಲ್ಲಿ ಪರಿಣಿತರು. ಇದನ್ನು ಅವರು ಕಳೆದ ಬಾರಿಯೇ ಸಾಬೀತು ಪಡಿಸಿದ್ದರು. ಅದನ್ನು ಈ ಬಾರಿ ಇನ್ನೂ ವಿಶೇಷತೆಯೊಂದಿಗೆ ನೃತರುತ್ಯ ತಂಡದ ಸದಸ್ಯ ಶ್ರೀ ರೋಹನ್ ರಾಜ್ ಅವರ ನೃತ್ಯ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದವರು ಅಜಯ್ ರಾವ್, ಆದಿತ್ಯ ಕಾವೂರ್, ಭರತ್ ಅಡಿಗ, ಪ್ರದ್ಯುಮ್ನ, ರೇಣುಕಾ ಕಿರಣ್, ಕೀರ್ತನಾ ಶರತ್, ಶ್ರೀಲಕ್ಶ್ಮಿ ದಾಸ್, ವಿದ್ಯಾ ರಾವ್, ಮೇಧಿನಿ ಕಲ್ಮಾಡಿ ಹಾಗು ಅರ್ಚನ ರಾವ್ ಮಹಾ ವಿಶ್ಣು ಕುರಿತ ಗೀತೆ ’ನಮೋ ನಮೋ’ ಮೂಲಕ. ನಮೋ ನಮೋ ನೃತ್ಯ ಸಾಂಸ್ಕೃತಿಕ ಸಂಜೆಯ ಮುಖ್ಯ  ಆಕರ್ಷಣೆಯಾಗಿ ಹೊರ ಹಮ್ಮಿತು. ಕೊನೆಯದಾಗಿ ಪೂಜೆಯೊಂದಿಗೆ ಶ್ರೀ ವೆಂಕಟೇಶ್ವರನಿಗೆ ವೈಭವದ ಆರಾಧನೆಯನ್ನು ನಡೆಸಿಕೊಟ್ಟರು ಶ್ರೀ ಮಧುಸೂದನ್ ಕಾವೂರ್ ಹಾಗು ವೈ. ಜಯಂತ್ ರಾವ್. ಸಾಂಸ್ಕೃತಿಕ ಸಂಜೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ನೆನಪಿನ ಕೊಡುಗೆ ನೀಡಿದರು ಗಣೇಶ್ ಸ್ಟೀಲ್ ಸೆಂಟರ್ ನ ಮಾಲೀಕರಾದ ಶ್ರೀ ಭಾಸ್ಕರ್ ರಾವ್.

ಈ ಕಾರ್ಯಕ್ರಮವನ್ನು ಸಂಯೋಜಿಸಲು ಹಗಲು-ರಾತ್ರಿ ಶ್ರಮ ವಹಿಸಿ, ಕಲಾವಿದರಿಗೆ ಬೆನ್ನೆಲುಬಾಗಿ ನಿಂತ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಶ್ರೀಮತಿ ಕಸ್ತೂರಿ ಐತಾಳ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ ಬಳಿಕ ಶಾಂತಿ ಮಂತ್ರವನ್ನು ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

- ಸಾಂಸ್ಕೃತಿಕ ಸಮಿತಿಯ ಪರವಾಗಿ ಆದಿತ್ಯ ಕಾವೂರ್

ಮಾಜಿ ಅಧ್ಯಕ್ಷರಾದ ಡಾ | ಪಿ.ಜೆ.ಬಾಗಿಲ್ತಾಯ ನಿಧನ

ಪಡುಬಿದ್ರಿ, ನ ೧೨, ರಾಜ್ಯದ ಪೋಲೀಸ್ ಮಹಾ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದ ಇಲ್ಲಿಗೆ ಸಮೀಪದ ಪಲಿಮಾರಿನ ಡಾ| ಪಿ. ಜಯರಾಮ ಬಾಗಿಲ್ತಾಯ (೮೭ ವ) ಬುಧವಾರ ಸಂಜೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧರಾದರು.

ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸುಮಾರು ೩೦ ವರ್ಷಗಳ ತಮ್ಮ ಸುದೀರ್ಘ ಪೊಲೀಸ್ ಇಲಾಖಾ ಸೇವಾವಧಿಯಲ್ಲಿ ಮದ್ರಾಸ್, ಗೋವಾ, ಮೈಸೂರು ಪ್ರಾಂತ್ಯಗಳು ಹಾಗೂ ಈಗಿನ ಕರ್ನಾಟಕದಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಪೊಲೀಸ್ ಸೇವೆಗಾಗಿ ರಾಷ್ಟ್ರಪತಿ ಪದಕವನ್ನೂ ಪಡೆದಿದ್ದರು. › Continue reading

Dr. P. J. Bagilthaya passed away

Dr. P. J. Bagilthaya, (87 yrs) , Our beloved ex President of Ananda Balaga  passed away on the evening of 12th November, 2008. after a short ill health. Funerals taken place next day in Bangalore.  Final rituals will be held at his native, Palimar. › Continue reading